ತಲಕೋಣ ಕಾಡಿನಲ್ಲಿ ?ಮದುವೆಮನೆ
Posted date: 19/April/2010

ಗೋಲ್ದನ್‌ಸ್ಟಾರ್ ಗಣೇಶ್ ಹಾಗೂ ಖ್ಯಾತ ನಟಿ ಶ್ರದ್ಧಾಆರ್ಯ ಜೋಡಿಯ ‘ಮದುವೆಮನೆ ಚಿತ್ರಕ್ಕೆ ತಿರುಪತಿ ಬಳಿಯ ತಲಕೋಣ ಕಾಡಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಎಂಟು ದಿನಗಳ ಕಾಲ ಇದೇ ಕಾಡಿನಲ್ಲಿ ಚಿತ್ರೀಕರಣ ನಡೆಯಲಿದ್ದು ಗಣೇಶ್ ಹಾಗೂ ಶ್ರದ್ಧಾಆರ್ಯ ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
    ಜೆ.ಜೆ ಇಂಟರ್ ನ್ಯಾಷನಲ್ ಸಂಸ್ಥೆಯ ಮೂಲಕ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ ‘ಮದುವೆಮನೆಗೆ ಸುನೀಲ್‌ಕುಮಾರ್‌ಸಿಂಗ್ ನಿರ್ದೇಶನದ ಸಾರಥ್ಯ ವಹಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ರಚನೆ ಕೂಡ ಇವರದೆ.
    ರಾಮಾಯಣದಲ್ಲಿ ಜರುಗಿದ ಕೆಲವು ಪ್ರಸಂಗಗಳೇ ಚಿತ್ರದ ಕಥೆಗೆ ಸ್ಪೂರ್ತಿ ಎಂದು ತಿಳಿಸಿದ ನಿರ್ದೇಶಕರು ಚಿತ್ರ ಪೂರ್ತಿ ‘ಮದುವೆಮನೆಯ ಸಡಗರ ತುಂಬಿರುತ್ತದೆ ಎನ್ನುತ್ತಾರೆ.
    ‘ಜುಗಾರಿಯ ಅವಿನಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಬಲನಾಣಿ, ಶರಣ್, ಹನುಮಂತೇಗೌಡ, ಕೆ.ವಿ.ನಾಗೇಶ್‌ಕುಮಾರ್, ಎಂ.ಎನ್.ಎಂ. ಚಿತ್ಕಲಾ, ಡಾ:ನಾಗೇಶ್, ಜಾದವ್‌ಮೈಸೂರು, ಚಿನ್ನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
     ಮಣಿಕಾಂತ್ ಕದ್ರಿ ಸಂಗೀತವಿರುವ ಈ ಚಿತ್ರಕ್ಕೆ ಶೇಖರ್‌ಚಂದ್ರು ಛಾಯಾಗ್ರಹಣವಿದೆ. ಸೌಂದರ್‌ರಾಜ್ ಸಂಕಲನ, ರವಿವರ್ಮ ಸಾಹಸ, ಮೋಹನ್ ಬಿ ಕೆರೆ ಕಲಾನಿರ್ದೇಶನ ‘ಮದುವೆಮನೆ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed